ಸದಾನಂದ ಕೆ.ಸಫಲಿಗ ನಿಧನ
ಮುಂಬಯಿ, ಅ.22: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯ, ಸಾಫಲ್ಯ ಸೇವಾ ಸಂಘದ ಸದಸ್ಯ, ಕೊಡುಗೈ ದಾನಿ ಸದಾನಂದ ಸಫಲಿಗ(62.)ಅವರು ಇಂದಿಲ್ಲಿ ಶನಿವಾರ (ಅ.22) ಮುಂಜಾನೆ ತೀವ್ರ ಹೃದಯಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಉಡುಪಿ ಶಿರ್ವ ಮಂಚಕಲ್ ಮೂಲದವರಾಗಿದ್ದು, ಬೃಹನ್ಮುಂಬಯಿ ಅಲ್ಲಿನ ಹಿರಿಯ ಹೋಟೆಲ್ ಉದ್ಯಮಿಯಾಗಿದ್ದರು. ಸಮಾಜ ಸೇವಕರೆಣಿಸಿ ಕಲೀನಾ ಬಾಂದ್ರಾ ಪರಿಸರದಲ್ಲಿ ಜನಾನುರಾಗಿದ್ದರು. ಬಾಂದ್ರಾ
ಪೂರ್ವದ ಹೊಟೇಲ್ ಸಾಯಿಪ್ರಸಾದ್ ಮತ್ತು ಹೊಟೇಲ್ ರಾಜ್ಯೋಗ್ ಮಾಲಕರಾಗಿದ್ದು ಮುಂಬಯಿಯ ಹಲವು ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿದ್ದರು. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಶಿರ್ವ, ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಶ್ರೀ ಬಬುಸ್ವಾಮಿ ದೈವಸ್ಥಾನ ನಡಿಬೆಟ್ಟು ಮೊದಲಾಗ ಪುಣ್ಯಕ್ಷೇತ್ರಗಳ ಜೀರ್ಣೋದ್ಧಾರ ಸಮಿತಿಗಳಲ್ಲಿ ಕಾರ್ಯನಿರ್ವಾಹಿಸುತ್ತಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಮತ್ತು ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.