ಮುಂಬಯಿ, ಜ.24: ಸಂಘಟನೆಯಲ್ಲಿ ಸಕ್ರೀಯವಾದಗಲೇ ಸಂಸ್ಥೆಗಳ ಉನ್ನತಿಸಾಧ್ಯ. ಸಂಸ್ಥೆಗಳ ವೃದ್ಧಿಯಿಂದ ಸದಸ್ಯ, ಸಮಾಜದ ಸರ್ವೋನ್ನತಿ ಆಗುವುದು. ಪತ್ರಕರ್ತರಿಂದ ಸಮಾಜ ಪಕ್ವವಾಗುವುದು ಎಂದು ವಿೂರಾ ಭಯಂದರ್ ಹೊಟೇಲ್ ಅಸೋಸಿಯೇಶನ್‍ನ ಅಧ್ಯಕ್ಷ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ ನುಡಿದರು.

ಭಯಂದರ್ ಪೂರ್ವದ ಭಾರತರತ್ನ ಸಚಿನ್ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕ್ರಿಕೆಟ್ ಪಂದ್ಯಾಟದೊಂದಿಗೆ ಸಂಘದ ದಶಮಾನೋತ್ಸಕ್ಕೆ ಚಾಲನೆ ನೀಡಿದ್ದು ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿದ್ದು ರತ್ನಾಕರ ಶೆಟ್ಟಿ ದೀಪ ಪ್ರಜ್ವಲಿಸಿ ಸಂಭ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ರಾಷ್ಟ್ರ ಧ್ವಜಾರೋಹಣಗೈದು ಗಣರಾಜ್ಯೋತ್ಸವ ಸಂಭ್ರಮಿಸಿ ತನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಿದರು. ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಸಾರಥ್ಯ ಮತ್ತು ಸದಸ್ಯ ಉಮೇಶ್‍ಕುಮಾರ್ ಅಂಚನ್ ಉಸ್ತುವರಿಯಲ್ಲಿ ನಡೆಸಲ್ಪಟ್ಟ ಕ್ರಿಕೆಟ್ ಪಂದ್ಯಾಟದಲ್ಲಿ ವಿೂರಾ ಭಯಂದರ್ ನಗರಪಾಲಿಕಾ ಮಾಜಿ ನಗರ ಸೇವಕ, ಕ್ರೀಡಾಪಟು ರಾಜೇಶ್ ವೇತೋಸ್ಕರ್ ಗೌರವ ಅತಿಥಿಯಾಗಿದ್ದು ದಾಂಡಿಗನಿಗೆ ಚೆಂಡು ಎಸೆಯುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಅತಿಥಿ ಅಭ್ಯಾಗತರಾಗಿ ಬಂಟ್ಸ್ ಫೆರಂ ಮೀರಾರೋಡ್ ಅಧ್ಯಕ್ಷ ಜಯಪ್ರಕಾ ಶ್ ಆರ್.ಭಂಡಾರಿ ಪತ್ರಕರ್ತರ ದಶಮಾನೋತ್ಸವ ಲಾಂಛನ ಅನಾವರಣ ಗೊಳಿಸಿದರು. ವಿೂರಾ ಭಯಂದರ್ ಹೊಟೇಲ್ ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ಮಧುಕರ್ ಶೆಟ್ಟಿ, ವಿಲಾಸ್ ಜಾಧವ್, ಡಿ.ಜಿ ಶೆಟ್ಟಿ, ಪ್ರದೀಪ್ ಹೆಗ್ಡೆ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.

ಕ್ರೀಡೆಯು ವ್ಯಾಯಾಮ ಇದ್ದಂತೆ. ವಿದ್ಯೆಯಂತೆ ಕ್ರೀಡೆಯೂ ಮನುಷ್ಯರಿಗೆ ಮಹತ್ವದ್ದಾಗಿದೆ. ಆದುದರಿಂದಲೇ ಕ್ರೀಡೆಯನ್ನು ಜೀವನದ ಎರಡು ಕಣ್ಣುಗಳಂತೆ ಪರಿಗಣಿಸಲಾಗುತ್ತಿದೆ. ಇಂತಹ ಮಹತ್ವದ ಕ್ರೀಡೆಗೆ ವಿಶೇಷ ಲಕ್ಷ ್ಯವಿ ರಿಸುವುದು ಅವಶ್ಯಕವಾಗಿದೆ ಎಂದು ಜಯಪ್ರಕಾಶ್ ಭಂಡಾರಿ ಅಭಿಪ್ರಾಯ ಪಟ್ಟರು.

ಸಮಾಜಮುಖಿ ಸೇವೆಯಲ್ಲಿ ಪತ್ರಕರ್ತರ ಪಾತ್ರ ಅಪಾರವಾದದ್ದು. ಪತ್ರಕರ್ತರಿಗೆ ಬಿಡುವು ಇಲ್ಲದೆ ಮಾನಸಿಕ ನೆಮ್ಮದಿಯ ಕ್ಷೀಣತೆ ಕಾಡುವುದು ಸಹಜ. ಇವಕ್ಕೆಲ್ಲಾ ಇಂತಹ ಪಂದಾಟ್ಯಗಳು ಉತ್ತಮ ಪರಿಹಾರವಾಗಿದೆ ಎಂದು ವೇತೋಸ್ಕರ್ ತಿಳಿಸಿದರು.

ಮಧ್ಯಾಂತರದಲ್ಲಿ ಸ್ಥಳಿಯ ನಗರ ಸೇವಕಿ ಅರ್ಚನ ಎ.ಕದಂ, ಶಿವಸೇನಾ ಕ್ಷೇತ್ರ ಪ್ರಮುಖ ಅರುಣ್ ಕದಂ, ಹಿರಿಯ ಪೆÇಲೀಸ್ ನಿರೀಕ್ಷಕ ಸುರೇಶ್ ಜಿ.ಗಗಂಜೆ, ಭಯಂದರ್‍ನ ಸೈಂಟ್ ಆಗ್ನೇಸ್ ಇಂಗ್ಲೀಷ್ ಹೈಸ್ಕೂಲು ಕಾರ್ಯಾಧ್ಯಕ್ಷ ಅರುಣೋದಯ ರೈ ಮತ್ತಿತರರು ಆಗಮಿಸಿ ಟಾಸ್‍ಗೈದು ಪಂದ್ಯಾಟಕ್ಕೆ ತಂಡಗಳನ್ನು ಆಯ್ದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ವಿ. ಪೂಜಾರಿ ನಿಡ್ಡೋಡಿ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ಡಾ| ದಿನೇಶ್ ಶೆಟ್ಟಿ ರೆಂಜಾಳ, ಸಲಹಾ ಸಮಿತಿ ಸದಸ್ಯ ಪಂಡಿತ್ ನವೀನ್ಚಂದ್ರ ಆರ್.ಸನೀಲ್, ವಿಶೇಷ ಆಮಂತ್ರಿತ ಸದಸ್ಯ ಶ್ರೀಧರ್ ಉಚ್ಚಿಲ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಪಂದ್ಯಾಟದಲ್ಲಿ ಪಾಲ್ಗೊಂಡರು.

ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ, ವಿಶೇಷ ಆಮಂತ್ರಿತ ಸದಸ್ಯ ಸುರೇಶ್ ಶೆಟ್ಟಿ ಯೆಯ್ಯಾಡಿ ಸಹಯೋಗದೊಂದಿಗೆ ಪಂದ್ಯಾಟ ನಡೆಸಲ್ಪಟ್ಟಿತು. ಸವಿತಾ ಎಸ್.ಶೆಟ್ಟಿ, ವಿದ್ಯಾ ಎಂ.ಭಂಡಾರಿ, ತಾರಾ ಆರ್.ಬಂಟ್ವಾಳ್ ರಾಷ್ಟ್ರಗೀತೆಯನ್ನಾಡಿದರು. ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದರು. ವಿಶ್ವನಾಥ್ ಶೆಟ್ಟಿ (ಆರಾಧನಾ) ಮತ್ತು ಸುಭ್‍ದೀಪ್ ಶೆಟ್ಟಿ ಕಾಮೆಂಟರಿ ನಡೆಸಿದರು. ಉಪಾಧ್ಯಕ್ಷ ದಯಾ ಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ಧನ್ಯವದಿಸಿದರು.

LEAVE A REPLY

Please enter your comment!
Please enter your name here