ಮುಂಬಯಿ, ಜ.16: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಪ್ರಪ್ರಥಮ ಡೈರೆಕ್ಟರಿಯನ್ನು ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹ ಸಂಸ್ಥೆ ಪೊವಾಯಿ ಇದರ ಉಪಾಧ್ಯಕ್ಷ ಹಾಗೂ ಮಹಾನಗರದ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಐ.ಆರ್.ಶೆಟ್ಟಿ ಅವರು ಬಿಡುಗಡೆಗೊಳಿಸಿದರು.

ಇಂದಿಲ್ಲಿ ಮಂಗಳವಾರ ಮುಂಬಯಿ ಸಾಂತಕ್ರೂಜ್ ಪೂರ್ವದಲ್ಲಿನ ಸಾಯಿ ಛೇಂಬರ್‍ನಲ್ಲಿ ನಡೆಸಲಾದ ಸರಳ ಸಭೆಯಲ್ಲಿ ಡೈರೆಕ್ಟರಿ ಬಿಡುಗಡೆಗೊಳಿಸಿದ ಸಿಎ| ಐ.ಆರ್.ಶೆಟ್ಟಿ ಅವರು ಮಹಾನಗರದಲ್ಲಿ ಪತ್ರಕರ್ತರ ಏಕತೆಯನ್ನು ಪ್ರಶಂಸಿ ಸಂಸ್ಥೆಯ ಎಲ್ಲಾ ಯೋಜನೆಗಳು ಫಲಪ್ರದಗೊಂಡು ಸದಸ್ಯರೆಲ್ಲರಿಗೂ ಈ ಸಂಸ್ಥೆ ಮಾದರಿಯಾಗಲಿ ಎಂದು ಶುಭಹಾರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕಾರ್ಯದರ್ಶಿ ದಯಾಸಾಗರ್ ಚೌಟ ವಿಶೇಷ ಆಮಂತ್ರಿತ ಸದಸ್ಯರಾದ ಸಿಎ| ಉಳ್ಳೂರುಗುತ್ತು ಶಂಕರ್ ಶೆಟ್ಟಿ ಮತ್ತು ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here