ಬೆಂಗಳೂರು, ಆಗಸ್ಟ್. 24: ಕರ್ನಾಟಕ ಸರಕಾರವು ಮುಂಬಯಿಯಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಕಛೇರಿಯನ್ನು ಒದಗಿಸುವಂತೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಿತು.

ಇಂದಿಲ್ಲಿ ಬುಧವಾರ ಪೂರ್ವಾಹ್ನ ಬೆಂಗಳೂರುನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾ ಕಛೇರಿಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಭೇಟಿ ನೀಡಿದ ಪತ್ರಕರ್ತರ ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಮತ್ತು ಕಾರ್ಯದರ್ಶಿ ದಯಾಸಾಗರ್ ಚೌಟ ಅವರು ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ದಾಖಲೆಗಳ ಮನವಿ ಸಲ್ಲಿಸಿತು.

ಮುಂಬಯಿಯಲ್ಲಿ ನೆಲೆಸಿರುವ ಹೊರನಾಡ ಕನ್ನಡಿಗ ಜನತೆಗಾಗಿ ಕರ್ನಾಟಕ ಸರಕಾರವು ನವಿಮುಂಬಯಿ ಇಲ್ಲಿನ ವಾಶಿಯಲ್ಲಿ ಸಿಡ್ಕೋ ಹಂಚಿಕೆಯ ಸೆಕ್ಟರ್ 30ರಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಸಮಲೋಚನಾ ಕೊಠಡಿ ಮತ್ತು ಕಛೇರಿಯನ್ನು ಒದಗಿಸುವರೇ ಸಂಘವು ಮುಖ್ಯಮಂತ್ರಿ ಹಾಗೂ ಇತರೇ ಸಚಿವರಲ್ಲಿ ಮನವಿ ಮಾಡಿತು.

ಹೊರನಾಡ ಹಿರಿಯ ಪತ್ರಕರ್ತರ ಸುಮಾರು ಏಳೂವರೆ ದಶಕದ ಕನಸು ನನಸಾಗಿಸಿ, ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ನಾಲ್ಕು ವರ್ಷಗಳ ಹಿಂದೆಯಷ್ಟೇ ರಾಜ್ಯಮಟ್ಟದ ಸಂಘಟನೆಯಾಗಿ ಮಹಾರಾಷ್ಟ್ರ ರಾಜ್ಯದ ದಯಾಧರ್ಮ ಕಾಯಿದೆ (ಚ್ಯಾರಿಟೇಬಲ್ ಆಕ್ಟ್) ಅಧೀನದಲ್ಲಿ ಮತ್ತು ಸಂಸ್ಥೆಗಳ (ಸೊಸೈಟಿ ರಿಜಿಸ್ಟರ್ಡ್) ನೋಂದವಣಿ ಅಧಿನಿಯಮಾನುಸಾರ ಮುಂಬಯಿ ಪ್ರಾದೇಶಿಕ ರಿಜಿಸ್ಟ್ರರ್ ಆಫ್ ಸೊಸೈಟಿಸ್ ಪ್ರಕಾರ ದಾಖಲಾಗಿ ಸಂಪೂರ್ಣ ಪ್ರಮಾಣದ ಸಂಸ್ಥೆಯಾಗಿ ರೂಪುಗೊಂಡ ಕನ್ನಡಿಗ ಪತ್ರಕರ್ತರ ಸಂಘದಲ್ಲಿ ಮಹಾರಾಷ್ಟ್ರ ರಾಜ್ಯದಾದ್ಯಂತದ ಸುಮಾರು 100 ಸದಸ್ಯರುಗಳಿದ್ದಾರೆ. ಕರ್ನಾಟಕ ರಾಜ್ಯದಿಂದ ಪ್ರಕಾಶಿತಗೊಳ್ಳುವ ಪ್ರಮುಖ ಎಲ್ಲಾ ಕನ್ನಡ ಮತ್ತಿತರ ದೈನಿಕಗಳು, ದೂರದರ್ಶನ, ಖಾಸಗಿ ಚಾನೆಲ್‍ಗಳು ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಕ್ಷಣಕ್ಷಣಕ್ಕೂ ವರದಿಗಳನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ತರದ ಪತ್ರಿಕಾಗೋಷ್ಠಿಗಳನ್ನು ಹಮ್ಮಿಕೊಳ್ಳಲು ಸಂಘಕ್ಕೆ ಸ್ವಂತದ ಕಛೇರಿ ಅಥವಾ ಸಮಲೋಚನಾ ಕೊಠಡಿಯೂ ಇಲ್ಲವಾಗಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಸಂಘದ ರೋನ್ಸ್ ಬಂಟ್ವಾಳ್ ವಿವರಿಸಿದರು.

ಸಿಟಿ ಆ್ಯಂಡ್ ಇಂಡಸ್ಟ್ರೀಯಲ್ ಡೆವಲಪ್‍ಮೆಂಟ್ ಕಾಫೆರ್Çರೇಶನ್ ಲಿಮಿಟೆಡ್ ಇವರಿಂದ ಕರ್ನಾಟಕ ಸರಕಾರವು ಖರೀದಿಸಿದ ಸ್ಥಳದಲ್ಲಿ ಸರಕಾರದ ಅಧೀನತೆಯಲ್ಲಿ ಮೈಸೂರು ಸೇಲ್ಸ್ ಇಂಟರ್ ನೇಷನಲ್ ಲಿಮಿಟೆಡ್ (ಎಂಐಸಿಎಲ್) ಇದರ ಹೊಣೆಗಾರಿಕೆಯಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಸಮಲೋಚನಾ ಕೊಠಡಿ ಮತ್ತು ಕಛೇರಿಯನ್ನು ಒದಗಿಸುವಂತೆ ಸ್ಥಳಾವಕಾಶ ಕಲ್ಪಿಸಿ ಕೊಡುವಂತೆ ದಯಾಸಾಗರ್ ಚೌಟ ತಿಳಿಸಿದರು.

ಈ ಬಗ್ಗೆ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ಕ್ರಮಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕನ್ನಡಿಗ ಪತ್ರಕರ್ತರ ಸಂಘ ಭರವಸೆಯನ್ನೀಡಿರುವುದಾಗಿ ರೋನ್ಸ್ ಬಂಟ್ವಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here